ಸೋಮವಾರ, ನವೆಂಬರ್ 29, 2010

ಕನ್ಯೆ - ಕೆನ್ನೆ !!!!



ನನ್ನ ಕನಸಿನ ಕನ್ಯೆ   

ನಿನ್ನ ನೆನಪಿಸಿಕೊಂಡೆ ನಿನ್ನೆ 

ನನ್ನ ನೆನಪಿಲ್ಲವೇ ಮನದನ್ನೆ 

ನಿನ್ನ ನೋಡಿ ಮಾಡಿದೆ ಕಣ್ಸನ್ನೆ 

ನೀ ಬೀಸಿದ ಹೊಡೆತಕ್ಕೆ ಊದಿತು ಕೆನ್ನೆ 

ಪ್ರೇಮ-ಪರೀಕ್ಷೆಯಲ್ಲಿ ಸಿಕ್ಕಿತು ದೊಡ್ಡ-ಸೊನ್ನೆ !!!!!!

ಬುಧವಾರ, ಅಕ್ಟೋಬರ್ 20, 2010

ಸ್ನೇಹ-ಪ್ರೀತಿ ....




ಮನ ಕರಗಿತು ನಿನ್ನ ಪರಿಚಯ ಆದಾಗ


ಅರಿಯದೆ ಪ್ರೀತಿಸಿದೆ ನಿನ್ನ ಸ್ನೇಹವಾದಾಗ


ಗೊತ್ತಾಗದೆ ನಾ ಕಾದೆ ನಿನ್ನ ಪ್ರೀತಿಗಾಗಿ


ಆದ್ರೆ ಕಣ್ಣ
ಲ್ಲಿ
ನೀರು ಬಂತು


ನನ್ನ ಅಗಲಿ ನೀ ದೂರ ಸರಿದಾಗ!!!!!!!!!


ಸೋಮವಾರ, ಸೆಪ್ಟೆಂಬರ್ 20, 2010

ಗೆಳೆಯ !!!

ಎಲ್ಲರಂತಲ್ಲಾ ನನ್ನ ಗೆಳೆಯ

ಒಂದಿನ ಮಾತಾಡಿದರೆ

ನಾಲ್ಕು ದಿನ ಮೌನದಿಂದಿರುವ

ಎಲ್ಲರೊಂದಿಗೆ ಹೊಂದಿಕೊಳ್ಳುವ

ಕಷ್ಟ-ಸುಖ ಹಂಚಿಕೊಳ್ಳುವ

ಬೇರೆಯವರ ಕಷ್ಟಕ್ಕೆ ಸ್ಪಂದಿಸುವ

ನನ್ನ ಕಂಡರೆ ಮಾತ್ರ ಯಾಕೆ ದೂರ ಸರಿಯುವಾ!!!

ಗುರುವಾರ, ಜುಲೈ 29, 2010

"ಪ್ರೇಮ - ಪತ್ರ "


ನಿನಗೆ ನಾ ಬರೆದೆ ಪ್ರೇಮಪತ್ರ

ತಲುಪಿತು ಪ್ರಿನ್ಸಿಪಾಲ್ ಹತ್ರ

ಮರು ಕ್ಷಣ ಬಂತು ಟಿ.ಸಿ ಪತ್ರ

ತಲೆ ಕೆಳಗಾಯ್ತು ನನ್ನ ಸೂತ್ರ

ಆಗಿಲ್ಲ ಪ್ರೇಮಯಾನ ಸುಸೂತ್ರ

ನೀ ಹೇಳ ಬೇಡ್ವೆ ಯಾರ ಹತ್ರ

ನಗು ಆದರೆ ಸ್ವಲ್ಪ ಮಾತ್ರ!!

ಬುಧವಾರ, ಜೂನ್ 2, 2010

ಸೂಟಿ- ಸ್ಕೂಟಿ !!!!!!


ನಾನು ಭಾರಿ ನಾಟಿ

ಒಮ್ಮೆ ಕಂಡೆ ಒಂದು ಬ್ಯೂಟಿ

ಏರುತ್ತಿದ್ದಳು ಹೊಸ ಸ್ಕೂಟಿ

ಹಿಂದೆ ಹಿಂದೆ ಹೋದೆ ಆ ಪಾಟಿ

ವಾಪಸ್ ಬಂದಾಗ ನನಗಿಲ್ಲ ಯಾರು ಸಾಟಿ

ಯಾಕೆ ಗೊತ್ತಾ!!ಆ ಘಾಟಿ

ಕೊಟ್ಟ ಏಟಿನ ಚಾಟಿ

ನಾ ಹಾಕಿದ್ದೆ 1 ವಾರ ಸೂಟಿ...!!!!!!

ಶನಿವಾರ, ಮೇ 15, 2010

ಸಿನಿಮಾ ಟಾಕೀಸ್ ನಲ್ಲಿ!!!



ಹೆಂಡತಿ ಕೋಪಿಸಿಕೊಂಡಾಗ

ರಜಾ ಇದ್ದರೂ ನಾನಾಗ ಆಫೀಸ್ ನಲ್ಲಿ !! !!!!

ಕೋಪ ಕರಗಿ ಸೌತೆಕಾಯಿ ಯಾದಾಗ

ಕೆಲಸವಿದ್ದರೂ ನಾವೀಗ

ಸಿನಿಮಾ ಟಾಕೀಸ್ ನಲ್ಲಿ !!!!!


ಭಾನುವಾರ, ಏಪ್ರಿಲ್ 18, 2010

ದಾಡಿ !!??

ಸೌಂದರ್ಯಕ್ಕೆ ನಾ ಬಿಟ್ಟರೆ ದಾಡಿ .


ಬೈಯುವಳು ನನ್ನೊಲವಿನ ಜೋಡಿ .


ಪ್ರತಿದಿನ ಬೆಳಿಗ್ಗೆ ಎದ್ದು ನೋಡಿ


ಮಾಡಿಕೊಳ್ಳಲಿಕ್ಕೆ ನಿಮಗೇನು ದಾಡಿ ???


ಶುಕ್ರವಾರ, ಮಾರ್ಚ್ 12, 2010

ಮೇರಿ - ದಾರಿ

ಒಹ್ ನನ್ನ ಮೇರಿ


ನಿನಗಾಗಿ ತಂದಿರುವೆ ಒಂದು ಸ್ಯಾರಿ


ಅದನ್ನು ಕೊಡಲು ಬಂದೆ ನಿಮ್ಮನೆ ಕಂಪೌಂಡ್ ಹಾರಿ


ಆದ್ರೆ ನಿಮ್ಮಪ್ಪ ತೋರಿಸಿದನಲ್ಲೇ ಹಾಸ್ಪಿಟಲ್ ದಾರಿ. ...!!!!!!!

ಸೋಮವಾರ, ಮಾರ್ಚ್ 8, 2010

'ರೀಲ್"


ಗಿಡ ಬಾಡಿದರೆ ನೀರು ಬಿಡುವೆನು .

ಹೃದಯ ಬಾಡಿದರೆ ಕಣ್ಣೀರು ಬಿಡುವೆನು.

ನೀವು ಬಾಡಿದರೆ ಜೀವವನ್ನೇ ಬಿಡುವೆನು.

ನೀವು ಖುಷಿಯಾಗಿರಲು ಆಗಾಗ ಈ ಥರ.

ಸಣ್ಣ "ರೀಲ್" ಬಿಡುವೆನು!!!!!

ಮಂಗಳವಾರ, ಮಾರ್ಚ್ 2, 2010

ಜೀವನದ ನೀತಿ ಸೂತ್ರಗಳು
*************************

ಗುಣವಿಲ್ಲದಿದ್ದರೆ ರೂಪ ವ್ಯರ್ಥ
ನಮ್ರತೆ ಇಲ್ಲದಿದ್ದರೆ ವಿದ್ಯೆ ವ್ಯರ್ಥ
ಉಪಯೋಗಿಸದಿದ್ದರೆ ಧನ ವ್ಯರ್ಥ
ಹಸಿವೆ ಇಲ್ಲದಿದ್ದರೆ ಭೋಜನ ವ್ಯರ್ಥ
ಗುರಿಯಿಲ್ಲದಿದ್ದರೆ ಸಾಧನೆ ವ್ಯರ್ಥ
ಪರಮಾತ್ಮನ ಅರಿವಿಲ್ಲದಿದ್ದರೆ ಜೀವನವೇ ವ್ಯರ್ಥ

ಕ್ರೋಧ ಬುಧ್ಹಿಯನ್ನು ತಿನ್ನುತ್ತದೆ
ಅಹಂಕಾರ ಜ್ಞಾನವನ್ನು ತಿನ್ನುತ್ತದೆ
ಪ್ರಾಯಶ್ಚಿತ್ತ ಪಾಪವನ್ನು ತಿನ್ನುತ್ತದೆ
ಮೋಹ ಮರ್ಯಾದೆಯನ್ನು ತಿನ್ನುತ್ತದೆ
ಲಂಚ ಗೌರವವನ್ನು ತಿನ್ನುತ್ತದೆ
ಚಿಂತೆ ಆಯುಷ್ಯವನ್ನು ತಿನ್ನುತ್ತದೆ
******************************

ಶನಿವಾರ, ಫೆಬ್ರವರಿ 27, 2010

ಅತ್ತಿಗೆ -ಸುತ್ತಿಗೆ !!??




ಅಣ್ಣನ ಹೆಂಡ್ತಿ

ನನಗೆ ಅತ್ತಿಗೆ.

ಅಣ್ಣನಿಗೆ ಅವಳು

ದೊಡ್ಡ ಸುತ್ತಿಗೆ.

ಅದಕ್ಕೆ ಅಣ್ಣ ಇರ್ತಾನೆ

ಒಟ್ಟಿಗೆ .

ಮುನಿದರೆ ಹಿಡಿತಾರೆ

ಪೆಟ್ಟಿಗೆ !!!!!!!!